Monday, January 4, 2016

ಸಾಗುತಲೇ ಇತ್ತು ಮುನ್ನೆಲೆ ಕತೆ;
ಹರಿದುಹೋಗಿದ್ದು ಹಿಂದಣ ಪರದೆ.

ಕಲರವದ ನಡು ಕಡುಸ್ಮಶಾನ ಮೌನ,
ಕಾಮನಬಿಲ್ಲ ನಡು ಬರಡು ಬೂದಿಬಣ್ಣ,
ಚಿನ್ನದಂಥ ಏಕಾಂತಕೂ ಹಿಡಿದ ತುಕ್ಕು,
ನತ್ತು-ಮುತ್ತೆಲ್ಲ ಕಾಗೆಬಂಗಾರವಾದದ್ದು!

ಮರೀಚಿಕೆಯೆಂದರಿತೂ ಬೆನ್ನಟ್ಟಿದ ರಾಮ,
ಅರ್ಥದ ಬೆನ್ನಟ್ಟಿ ಹೈರಾಣಾದ ಶಬ್ದ
ನನ್ನೊಳಗೆ ಸೋತು ಕುಸಿವಾಗ
ಉಮೆಶಿವರ ಜೋಡಿಯೊಂದು ಮುರಿದುಬಿದ್ದದ್ದು!

ಧ್ಯಾನಸ್ಥ ಬೊಗಸೆಗೆ
ಇಷ್ಟೇ ಅಥವಾ
ಇಷ್ಟೊಂದೆಲ್ಲ
ದಕ್ಕಿದ ಪರಿ ಚಿಂತಿಸುತಿದ್ದೆ.

ಮಹಾನ್ ಚೇತನವೊಂದು
ತನ್ನಷ್ಟಕ್ಕೆ ಉಲಿಯುತಿತ್ತು..
"ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಮಾತು ಹೊರಳೀತು ಹೇಗೆ?
ಮತ್ತರ್ಥ ಹುಟ್ಟೀತು ಹೇಗೆ?"

No comments:

Post a Comment