Saturday, December 15, 2012

ಬುದ್ಧನಾಗಹೊರಟ ಭಾವ...


--------------------

ತಳಿರು ತೋರಣ ತಲೆಬಾಗಿಲಲಿ,

ಅಂಗಳಕೆ ಚೊಕ್ಕ ಚುಕ್ಕೆರಂಗೋಲಿ,

ಸ್ವಾಗತಫಲಕವಾಗಿ ನಿಂತು ನಗು,

ಖುಶಿಯಿತ್ತಿತು ಕಂಡವರಿಗಾಹ್ವಾನ.



ಬಣ್ಣಬಣ್ಣದ ಹೂವರಳಿ ತೋಟದಿ

ಘಮ ಹರಡಿ ಕೈಹಿಡಿದೆಳೆ ತರುತಾ...

ಮೆಲುಗಾನ ತಂಪಸೂಸೋ ಇಂಪಲಿ,

ದಾಟಿಹೋಗಲಾಗದ ಮತ್ತಾದ ಸೆಳೆತ.



ಭವ್ಯತೆಯ ನಿಲುವಿನ ಎದೆಯರಮನೆ ...

ತಲೆಯೆತ್ತಿ ನಿಂತ ನೆಲೆ ದೇಗುಲದಂತೆ..

ನಾಡಿ ಘಂಟಾನಾದ, ನುಡಿ ಶಂಖಘೋಷ...

ಪೂಜೆ ಅಲ್ಲೊಳಗಿನ ಭಾವದೇವಗೆ.....



ಹೊಸಿಲ ಹೂವಿಗ್ಯಾಕೋ ನಿಶ್ಯಬ್ಧ ಕಣ್ಣೀರು...

ಭಾವ ಗಮನದ ಬಯಕೆ.., ಹೊಸಿಲ ಬಂಧ.

ಗಲ್ಲಕೆ ಕೈಯಿಟ್ಟು ಕೂತ ಭಂಗಿ...

ನಿರೀಕ್ಷೆಯೇ, ಹತಾಶೆಯೇ..ನಿರಾಸೆಯೇ...?!



ಕಂಡವರೆಲ್ಲ ಪ್ರಸಾದ ಉಂಡೆದ್ದರು,

ಉಂಡೆಲೆಯ ಜೊತೆ ಬಾಡಿದ ಹೂವೂ ತಿಪ್ಪೆಗೆ...

ಕಂಡವರೂ ಇಲ್ಲ, ಕಣ್ಣಿಗೊತ್ತಿದವರೂ...



ಪೂಜೆ ಮಧ್ಯ ಎದ್ದುಹೊರಟ ಭಾವ

ಬುದ್ಧನಾಗ ಹೊರಟಿತ್ತೇ?

ಹೂವದಕೆ ಆಸೆಯೆನಿಸಿತೇ....?

No comments:

Post a Comment