Monday, September 16, 2013

**

ಮನಸು ನನ್ನ ಕೈಯ್ಯೊಳಗಿತ್ತು.
ನೀ ಒಂದೇ ಹೆಜ್ಜೆಯಳತೆ ದೂರ.
ನಿರ್ವಾತ ತುಂಬಿದಂತರ
ಗಾಳಿಬೆನ್ನೇರಿದ ವೇಗದಾಸೆ ಕ್ರಮಿಸಲಾಗಲಿಲ್ಲ.
 
ಒಂದೇ ಗಳಿಗೆ, ಯಥಾಸ್ಥಾನ ಹೊಕ್ಕಿದೆ ಮನಸು.
ನೀ ಪಡೆವುದಾಗಲಿಲ್ಲ ಎಂದರೂ
ನಾನೀವುದಾಗಲಿಲ್ಲ ಎಂದರೂ
ಅಂಥ ವ್ಯೆತ್ಯಾಸವೇನಿಲ್ಲ..
 
ಹಠಾತ್ತನೆ ದಿಕ್ಕುಬದಲಿಸಿವೆ
ಗಾಳಿ ಬೀಸಿದೆಡೆ ತೂರಿಕೊಳುವ ಹೆಜ್ಜೆ
ಮೈಮನಸು ಹಿಂಬಾಲಿಸಿ ಕಾಲ ದೂರ ಸಾಗಿದೆ..
ನಿರ್ವಾತ ನಿಧಾನ ಒಳಹೊಕ್ಕಿದೆ.
 
ನೆನಕೆಯಿಲ್ಲ, ಕನವರಿಕೆಯಿಲ್ಲ.
ಪ್ರಾಣವಿಲ್ಲ, ಪ್ರಮಾಣವೂ ಇಲ್ಲ.
ಪ್ರೀತಿಪ್ರೇಮ ಬಿಡು, ಉಸಿರಾಟವೇ ಇಲ್ಲ.
ಈಗ ಕೊಡುವುದೇನು, ಪಡೆವುದೇನು?
 
ಎಲ್ಲೋ ಕೆಲವು ಉಸಿರು ಕಡ ಸಿಕ್ಕರೆ,
ಒಳಹೊಕ್ಕಿ ಹೋರಾಡಿ ಅವು ಉಳಿದು ದಕ್ಕಿದರೆ,
ನಿರ್ವಾತದಾಳ್ವಿಕೆ ಹೇಗೋ ಪತನವಾದರೆ....
ನಿರ್ಜೀವ ಬಾಳಿಗಿಂದು ರೆ ಸಾಮ್ರಾಜ್ಯದ್ದೇ ಆಸರೆ..

No comments:

Post a Comment