Tuesday, September 27, 2016

ಸೊಗದ ಸುಗ್ಗಿಯ ಸುದ್ದಿ
ಹಾಗೇ ತೇಲಿ ಬಂದು ತಲುಪಿತು.
ನಗೆಯ ಹಾಳೆಯಗಲ "ಕುಶಲವೇ ಕ್ಷೇಮವೇ?"
ನಿಜಕ್ಕೂ ನಾ ಸುಳ್ಳಾಡಲಾರೆ...

ಕರೆಯುತ್ತಿರುವ ನೀನು,
ಮಾತು ಸತ್ತು ಮುಚ್ಚಿಯಾಗಿರುವ ಮೌನದ ಕೋಟೆಬಾಗಿಲು.
ಅದರ ಉದ್ದದಷ್ಟುದ್ದ ಬಯಕೆ, "ಇನ್ನೂ ಬೇಕು"
ಕ್ಷಿತಿಜದಂಥ ನೆಲೆಯ ಕನಸೇರ‍ಲಾರೆ.

ಪಾತಾಳಕೆ ಕಾಲೂರಿ ಮತ್ತೆ ಚಿಮ್ಮಿ ನೆಗೆದೆತ್ತರ
ಹಾರುವ ದೇವತೆಯ ಅಂಗಾಲಿಂದುದುರಿದ
ಚಿನ್ನದ ಪುಡಿಯೊಂದಿಷ್ಟು ನೆತ್ತಿ ಮುತ್ತಿಕ್ಕಿತು;
ನಗೆ-ನೋವುಗಳ ನಡುವೆ
ಇಲ್ಲೊಂದಿಷ್ಟು ಗುಟ್ಟಿನ ಜಾಗವಿದೆ;
ಅಲ್ಲಿಡಲಾಗಿದೆ ಬಲು ಜತನ;
ಯೋಚಿಸದಿರು, ಅದು ಹಾಗೇ ಹೊಳೆಹೊಳೆಯುತಿರುತದೆ!

ಪರಿಮಳ ಅಂಟಿಸಿ ಬೆಸೆಯಬಲ್ಲವನೊಬ್ಬ
ದೇವದೂತನ ವಿಮಾನ ಸಕಾಲ
ಬಂದಿಳಿವ, ಬರದಿರುವ ಮಾತು ಬಿಡು.
ಅಂಗಳದಲಿ ನಿನ್ನಿಷ್ಟದ ಕೆಂಪು ಕೇಪಳಗುಚ್ಛ
ಅಂದಿನಂತೇ ಮತ್ತೆ ಮತ್ತರಳಲಿದೆ!

2 comments:

  1. Chennaagide...innashtu monachu baralu saadhyhavide :-) ee kavitegalige talebaraha (sheershike kodi) innashtu sogasirutte

    ReplyDelete