(ಯಕ್ಷಿಣಿ - ಗಂಟಲು- ಬೆದರಿಕೆ - ಚಿಂತಾಜನಕ)
ಬೆಳಕ ಕೂಸೊಂದು ಡೊಗ್ಗಾಲಲಿ
ದಾಟಲಿತ್ತು ಕತ್ತಲರಮನೆಯ ಹೊಸಿಲು.
ನಿದ್ದೆಗಣ್ಣಿಗೆ ಅದಾವುದೋ ಬಂದುಸುರಿ ಹೋಗಿತ್ತು
"ಅವರ ಸಮಾಗಮಕೆ ನಿಗದಿಯಾಗಿದೆ ಹೊತ್ತು!"
ಅಕಾಲ ನೆರೆಗೆ ಗಂಟಲುಬ್ಬಿ ಬಂದ ಗಳಿಗೆ,
ಕಣ್ಣಿಂದವನ ಹೆಸರ ಹೊಳಪಿಳಿದುಹೋದ ಗಳಿಗೆ..
ಪರಿಚಿತವೂ, ಅಸ್ಪಷ್ಟವೂ ಒಂದಾಕೃತಿ
ಬಿಟ್ಟ ಕಣ್ಣೆದುರೇ ಕೂಗಿ ಹೇಳಿದೆ; ಬಹುಶಃ ಇದವನ ಯಕ್ಷಿಣಿಯೇ...
"ಅಲ್ಲೊಂದು ಚಂದದ್ದು ಚಿಂತಾಜನಕವಿದೆಯಂತೆ
ಬಗಿದೆದೆಯ ನಗೆಯೊಳಗಿಂದ ಅಮೃತವುಣಿಸಬೇಕಂತೆ."
ನಂದಾದೀಪಕಷ್ಟು ತುಪ್ಪ ಸುರಿದು,
"ಸರ್ವೇ ಜನಾಃ ಸುಖಿನೋ ಭವಂತು..."
ಹೇಳುತಲೇ ಇದೆ ಬಾಯಿ; ಮನಸನೆಳತರುತಾ ಕೈ..
ತಾಳಮೇಳ ತಪ್ಪಿಸುವ ಪ್ರೀತಿಯೆಂಬ ವಿವಶತೆಗೊಂದು ಜೈ
ಅಲ್ಲಿ ನೋವಿನೊಂದು ಸಣ್ಣ ಬೆದರಿಕೆಗಿಲ್ಲಿ ಎದೆಗೂಡು ಬಿರುಕು..
"ಅಯ್ಯೋ ಪ್ರೀತಿಯೆಷ್ಟು ಚಂದ!"-ಮತ್ತೆ ಮತ್ತುಲಿವ ಮನಸು..
ಹೇಗೆ ಹೇಳಲಿ ಏನೊಂದನಾದರೂ ಈ ಪ್ರೇಮಿಗಳಿಗೆ?
ಅಲ್ಲಳುವಾಗ ಅವಳು, ಇಲ್ಲಿಂಚಿಂಚು ಸಾಯುವವಗೆ?
ಕರ್ಣನಲ್ಲ; ಎದೆಯಲಮೃತವಷ್ಟೇ ಇಲ್ಲ, ಬಗೆದೀವುದರಿತಿಲ್ಲ;
ಹಂಬಲಿಸುವುದಷ್ಟೇ ಗೊತ್ತು; ನಾನೂ ನಿಮ್ಮಿಂದ ಹೊರತಲ್ಲ...
ಬೆಳಕ ಕೂಸೊಂದು ಡೊಗ್ಗಾಲಲಿ
ದಾಟಲಿತ್ತು ಕತ್ತಲರಮನೆಯ ಹೊಸಿಲು.
ನಿದ್ದೆಗಣ್ಣಿಗೆ ಅದಾವುದೋ ಬಂದುಸುರಿ ಹೋಗಿತ್ತು
"ಅವರ ಸಮಾಗಮಕೆ ನಿಗದಿಯಾಗಿದೆ ಹೊತ್ತು!"
ಅಕಾಲ ನೆರೆಗೆ ಗಂಟಲುಬ್ಬಿ ಬಂದ ಗಳಿಗೆ,
ಕಣ್ಣಿಂದವನ ಹೆಸರ ಹೊಳಪಿಳಿದುಹೋದ ಗಳಿಗೆ..
ಪರಿಚಿತವೂ, ಅಸ್ಪಷ್ಟವೂ ಒಂದಾಕೃತಿ
ಬಿಟ್ಟ ಕಣ್ಣೆದುರೇ ಕೂಗಿ ಹೇಳಿದೆ; ಬಹುಶಃ ಇದವನ ಯಕ್ಷಿಣಿಯೇ...
"ಅಲ್ಲೊಂದು ಚಂದದ್ದು ಚಿಂತಾಜನಕವಿದೆಯಂತೆ
ಬಗಿದೆದೆಯ ನಗೆಯೊಳಗಿಂದ ಅಮೃತವುಣಿಸಬೇಕಂತೆ."
ನಂದಾದೀಪಕಷ್ಟು ತುಪ್ಪ ಸುರಿದು,
"ಸರ್ವೇ ಜನಾಃ ಸುಖಿನೋ ಭವಂತು..."
ಹೇಳುತಲೇ ಇದೆ ಬಾಯಿ; ಮನಸನೆಳತರುತಾ ಕೈ..
ತಾಳಮೇಳ ತಪ್ಪಿಸುವ ಪ್ರೀತಿಯೆಂಬ ವಿವಶತೆಗೊಂದು ಜೈ
ಅಲ್ಲಿ ನೋವಿನೊಂದು ಸಣ್ಣ ಬೆದರಿಕೆಗಿಲ್ಲಿ ಎದೆಗೂಡು ಬಿರುಕು..
"ಅಯ್ಯೋ ಪ್ರೀತಿಯೆಷ್ಟು ಚಂದ!"-ಮತ್ತೆ ಮತ್ತುಲಿವ ಮನಸು..
ಹೇಗೆ ಹೇಳಲಿ ಏನೊಂದನಾದರೂ ಈ ಪ್ರೇಮಿಗಳಿಗೆ?
ಅಲ್ಲಳುವಾಗ ಅವಳು, ಇಲ್ಲಿಂಚಿಂಚು ಸಾಯುವವಗೆ?
ಕರ್ಣನಲ್ಲ; ಎದೆಯಲಮೃತವಷ್ಟೇ ಇಲ್ಲ, ಬಗೆದೀವುದರಿತಿಲ್ಲ;
ಹಂಬಲಿಸುವುದಷ್ಟೇ ಗೊತ್ತು; ನಾನೂ ನಿಮ್ಮಿಂದ ಹೊರತಲ್ಲ...
ಬೆಳಕ ಕೂಸೊಂದು ಡೊಗ್ಗಾಲಲಿ
ReplyDeleteದಾಟಲಿತ್ತು ಕತ್ತಲರಮನೆಯ ಹೊಸಿಲು.
Super lines...
thank you :-)
ReplyDeletethank you :-)
ReplyDelete