Wednesday, April 10, 2013

ಅಂದು-ಇಂದು


-----------------
ಸಡಿಲಾದ ಅಪ್ಪುಗೆಯಲಿ ಕಾಲದ್ದೆ ಕೈ
ಅಂದೊಮ್ಮೆ ಬಿಗಿಗೆ ಉಸಿರೂ ಸೋತಿತ್ತು,
ತಬ್ಬಿದ್ದ ಮೌನಕ್ಕೆ ಶಬ್ಧ ತಲೆಬಾಗಿತ್ತು,
ಸತ್ತ ಮಾತಲಿ ಪ್ರೀತಿಯ ಹುಟ್ಟಿತ್ತು,
ಆ ಅನುಭವ ಅನುಭೂತಿಗೊಯ್ದಿತ್ತು..

ನೆನಪು ಜೋಕಾಲಿಯಲಿ ಜೀಕಿದ್ದೆ ಹೆಳೆ
ಇಂದು ಶುಷ್ಕವೆನಿಸಿದೆ,
ಉಸಿರು ನಿಡಿದಾಯ್ತು ನೋವೆಳೆದೆಳೆದು,
ಮೌನ ಗೈರು, ಮಾತಿನದೆ ಕಾರುಬಾರು,
ಪ್ರೀತಿ ಗುಬ್ಬಚ್ಚಿ ಹೆದರಿ ಮುದುಡಿದೆ,
ಕೊನೆಯತ್ತ ದೂಡುವ ಕಾಲಕೆದುರು ಹಾರಿ
ಸೋತಿದೆ, ಕ್ಷೀಣ ಬಾಳ್ವಾಸೆಯಾಸರೆ....

ಏನಾಯ್ತೋ, ಏಕಾಯ್ತೋ...!!
ಎಲ್ಲ ಮುಗಿದ ಭಾವದ ಭಾರ,
ಸತ್ತುದ ಸುಟ್ಟು ಬಂದಾಗಿನ ಶೂನ್ಯತೆ,
ನಡೆದ ಕಂದನ ಖಾಲಿತೊಟ್ಟಿಲ ವ್ಯಥೆ,
ಮೈಯ್ಯೆಲ್ಲ ಆವರಿಸಿ ಸಹಸ್ರಾಕ್ಷನ ಗೋಳಂತೆ
ಕಣ್ಣರಳಿಸಿ ನೋಡಲೇಬೇಕಾದ ಕತೆ..
ಅವು ಕಣ್ಬಿಟ್ಟಲ್ಲೆಲ್ಲಾ ಗಾಯವಾಗಿವೆ.
ಬಾಳು ಬಿಲ್ಲು ನಾಳೆಯೆಡೆಗೆ ಬಿಟ್ಟ
ಆದರೆ ಗುರಿಯಿರದ ಬಾಣವಾಗಿದೆ...

2 comments:

  1. ಬದುಕಿನಲ್ಲಿ ನಲಿವು-ನೋವು ಸಹಜ. ನಿಮ್ಮ ಕವನದ ನಿಟ್ಟುಸಿರು ಬದುಕನ್ನು ಹಗುರು ಮಾಡುತ್ತದೆ.

    ReplyDelete