Saturday, February 9, 2013

ನೆಲದಲಿದ್ದ ಧೂಳ ಕಣ ಗಾಳಿ ಕೈವಶ


ಏರಿತ್ತು ದೇಗುಲದ ಕಳಶ.

ಎಲ್ಲ ನಿಟ್ಟಿಸಿದ್ದು ತನನೇ ಎನಿಸಿ,

ತಾ ಬಲು ಘನವೆನಿಸಿ,

ನಿಮ್ನದೃಷ್ಟಿಗೊದಗಿದ ನೆಲವಾಸಿಗಳೆಲ್ಲ

ಈಗ ಬಲು ತೃಣವೆನಿಸಿ,.....

ತುದಿ ಚೂಪು ಚುಚ್ಚಿತೆನಿಸಿ,

ಕಳಶವೂ ಸರಿಯಿಲ್ಲೆನಿಸಿ,

ಮೆರೆವಾಗ ಮರೆತಿತ್ತು...

ಗಾಳಿಗೆ ಕೆಳಗಿಳಿಸುವುದೂ ಗೊತ್ತು.

ಹಾಗೆ ಕೆಳಗಿಳಿದೊಂದು ಕ್ಷಣ,

ಕಳಶವೂ ಕೆಳಗಿಳಿವುದ ಎದುರುನೋಡಿ,

ಕಣ್ಣು ಚುಚ್ಚಲು ಕಾದಿತ್ತು...





No comments:

Post a Comment