Saturday, July 6, 2013

**

ತಾನು ಹಚ್ಚಿಟ್ಟರೆ ದೀಪ
ಅವನು ಹಚ್ಚಿದರೆ ಬೆಂಕಿ
ಬೆಳಗಿದ ತಮಗಳಲ್ಲದಿದ್ದರೂ
ಸುಟ್ಟಿರುವ ಬಾಳುಗೋಳಿನದು
ಇಡುವುದು ಜಗ ನಿಖರ ಅಂಕಿ.
ಘರ್ಷಣೆಯ ಕೂಸು ಕಿಡಿ ಪಾಪ,
ತಾನೊಂದೇ; ಜಗವಿತ್ತದ್ದು ಮಾತ್ರ
ಗುರುತೊಂದಲ್ಲ, ತೊಟ್ಟಿಲೊಂದಲ್ಲ.
ಅನಾಮಿಕ ಕೈ, ಮನದ ತೆವಲಿಗೆ
ತುರಿಸುವ ಬಾಯಿ, ಕಣ್ಣ ವಿಕೃತಿಗೆ
ಬಗೆಬಗೆ ವೇಷ, ತಕ್ಕಂತೆ ಆವಾಸ.
ನೀರೂ, ಈ ಕಿಡಿಯೂ ಒಮ್ಮೊಮ್ಮೆ
ವಿರೋಧಾಭಾಸ ಅನಿಸಿದರೂ,
ಒಂದೇ ಅನಿಸುವುದುಂಟು..
ಇದ್ದೆಡೆಗನುಗುಣ ಪಾತ್ರ...

No comments:

Post a Comment