Wednesday, June 12, 2013

ಪಡಿಮೂಡಿಸಿಕೊಂಡ ಬಿಂಬ ಕಪ್ಪುಬಿಳಿ ಚಿತ್ರ ; ಚಂದವೇ ಇತ್ತು.
ರಂಗು ತರಲು ಮಳೆಬಿಲ್ಲ ಕಡೆಹೋದ ಕಾಲದೆಲ್ಲಾ ರೆಕ್ಕೆ ಮುರಿದುಬಿದ್ದವು.
-----------------------------
ಕೈ ತಪ್ಪಿ ಹೋದ ಸೋಲಿನ ಕಣ್ಣೀರು ಆಸೆಗರಿಕೆ ಹಬ್ಬಿಸುವ ಮಳೆಯಾಯಿತು...
ಕೈಗೂಡಿದ ಸಮಾಧಾನದ ಉಸಿರು ನಂಬಿಕೆದೀಪವಾರಲು ನೆಪವಾಯಿತು...
----------------------------------
ನೀನಿಲ್ಲದಿದ್ದರೇನಂತೆ, ನನ್ನ ತಪ್ಪು ನನ್ನೆದುರೇ ಇದೆ.
ಕಣ್ಬಿಟ್ಟಾಗಲೆಲ್ಲ ನಿನ್ನ ವೇಷವನೇ ತೊಟ್ಟಿರುತ್ತದೆ.

No comments:

Post a Comment