Sunday, June 9, 2013


ಸಿದ್ಧಿಸಿತೆಂದು ಕುಣಿದಾಡಿದವನ ಮನೆದೇವರ

ಪಾದದಲಿ ಹೂವ ಬದಲು ದೂರುಗಳ ಸರಮಾಲೆಯಿತ್ತು.
--------------------------------------
ನೆತ್ತರ ನೆಕ್ಕಿಯಾದರೂ ಇಂಗ ಬಯಸುವ ದಾಹವೇ,
ನಿಮಿತ್ತ ಮಾತ್ರವಷ್ಟೇ ನೀನು, ಒಡಲು ನನ್ನದೇ.
---------------------------------
ಸಿಡಿಲ ಹೊತ್ತ ಬೆಳಕ ಬಳ್ಳಿಯೇ ,
ಬಯಲಲಿದ್ದವರ ಎಚ್ಚರಿಸುವುದ ನೀ
ಮರೆಯಲಿದ್ದರೂ ಮರೆಯುವುದಿಲ್ಲವಲ್ಲೇ?!
-----------------------------
ಇನ್ನೂ ದೋರ್ಗಾಯಿಯದು.. ಕಿತ್ತು ಕಡಿದರೆ,
ಅಲ್ಪ ಸಿಹಿ ತುಂಬ ಹುಳಿಯಷ್ಟೇ ನಿನ್ನ ಪಾಲು
ಬೆಳೆಯಲಿ ಬಿಡು ಬುಡದಲೇ ನಿಂತು ಕಾದರೆ,
ಕಳಿತ ಭಾರಕ್ಕೆ ಕಳಚಿ ನಿನ್ನ ಪದಕೇ ಉದುರೀತು

No comments:

Post a Comment